ಚಿತ್ರದ ನಿರ್ಮಾಪಕರಾದ ಎಚ್.ಸಿ. ಮಂಜುನಾಥ್ ಮತ್ತು ಕೆ. ತಿಮ್ಮರಾಜು, ನಿರ್ದೇಶಕ ಕಿರಣ್ ಶೆಟ್ಟಿ, ನಾಯಕ ನಟ ಪ್ರಥಮ್, ನಾಯಕಿಯರಾದ ಶ್ರುತಿ ಮತ್ತು ವೈಷ್ಣವಿ ಅಲ್ಲಿದ್ದರು. ಮೊದಲ ಮಾತು ಮಂಜುನಾಥ್ ಅವರದ್ದಾಗಿತ್ತು. ‘ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಇದು ವೀಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಮನೋರಂಜನೆ ನೀಡುವ ಚಿತ್ರ. ಸಮಯದ ಪರಿವೆಯೇ ಇಲ್ಲದಂತೆ ಸಿನಿಮಾ ನೋಡಬಹುದು’ ಎಂದರು ಮಂಜುನಾಥ್.