ಕುಂದಗೋಳ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಬಂದಿದ್ದಾರೆಂದು ನಾವು ಹೆದರಿಲ್ಲ. ನಮ್ಮಲ್ಲಿಯೂ ಅವರಗಿಂತ ಪ್ರಬಲ, ಸರಿಗಟ್ಟುವ ನಾಯಕರಿದ್ದಾರೆ. ಮುಂಬೈ ಕರ್ನಾಟಕದಲ್ಲಿ ನಾಯಕರ ಕೊರತೆ ಇಲ್ಲ. ಅವರಷ್ಟೇ ಶಕ್ತಿ, ಯುಕ್ತಿ ಇರುವವರು ಈ ಭಾಗದಲ್ಲಿ ಇದ್ದಾರೆ’ ಎಂದರು.