‘ಸಾಮಾಜಿಕ ನ್ಯಾಯದ ಕುರಿತು ಪ್ರತಿಪಾದನೆ ಮಾಡುವ ಕಾಂಗ್ರೆಸ್ ಪಕ್ಷ ದಲಿತರನ್ನೇಕೆ ಮುಖ್ಯಮಂತ್ರಿ ಮಾಡಲಿಲ್ಲ’ ಎಂಬ ಪ್ರಶ್ನೆ ಸಂವಾದದಲ್ಲಿ ಖರ್ಗೆ ಅವರಿಗೆ ಎದುರಾಯಿತು. ‘ಸಾಮಾಜಿಕ ನ್ಯಾಯ ಅಂದಾಕ್ಷಣ, ದಲಿತರನ್ನು ಮುಖ್ಯಮಂತ್ರಿ ಮಾಡುವುದಲ್ಲ. ನಾನಂತೂ ದಲಿತ ಎಂದು ಯಾವ ಸ್ಥಾನಮಾನವನ್ನೂ ಕೇಳುವುದಿಲ್ಲ. ಪ್ರತಿಭೆ ನೋಡಿ ಕೊಡಿ ಎನ್ನುವುದು ನನ್ನ ಪ್ರತಿಪಾದನೆ. ‘ಪಾಪ’ ಎನ್ನುವ ಅನುಕಂಪ ಖಂಡಿತ ಬೇಡ’ ಎಂದು ಉತ್ತರಿಸಿದರು.