ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸುಳುಗೋಡುವಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞ ಶರತ್ ಸೆರೆ ಹಿಡಿದಿದ್ದಾರೆ.
ಜಯ ಅವರ ತೋಟದ ತಾಳೆ ಮರದಲ್ಲಿ 12 ಅಡಿ ಉದ್ದ, 17 ಕೆ.ಜಿ ತೂಕದ ಭಾರಿ ಗಾತ್ರದ ಕಾಳಿಂಗ ಸರ್ಪ ಇತ್ತು. ಅದನ್ನು ಶರತ್ ಒಂದು ಗಂಟೆ ಪ್ರಯತ್ನದಿಂದ ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಸೆರೆ ಹಿಡಿದ ಅಪರೂಪದ ಕಾಳಿಂಗ ಸರ್ಪವನ್ನು ಶರತ್ ಅವರು ಸೋಮವಾರ ನಗರದ ಗಾಂಧಿ ಮೈದಾನದಲ್ಲಿ ಪ್ರದರ್ಶಿಸಿದರು.
‘ಹಾವು ಕಂಡರೆ ಕೊಲ್ಲಬೇಡಿ. ಹಾವುಗಳ ರಕ್ಷಣೆಗಾಗಿ ಮಾಹಿತಿ ನೀಡಿದರೆ ಹಾವಿನ ಜೀವ ಉಳಿಸುತ್ತೇವೆ. ಈವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನುರಕ್ಷಿಸಿ ದಟ್ಟ ಕಾಡಿಗೆ ಬಿಟ್ಟಿದ್ದೇವೆ. 23ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನೇ ರಕ್ಷಿಸಲಾಗಿದೆ’ ಎಂದು ಹೇಳಿದರು.