ಮಹಾರಾಷ್ಟ್ರ, ದೆಹಲಿ, ಕೇರಳ, ತಮಿಳುನಾಡು, ಗುಜರಾತ್ ಹಾಗೂ ರಾಜಸ್ಥಾನ ಹೈರಿಸ್ಕ್ ರಾಜ್ಯಗಳಾಗಿದ್ದು ಅಲ್ಲಿಂದ ಬಂದವರನ್ನು ಚೆಕ್ಪೋಸ್ಟ್ನಲ್ಲಿಯೇ ತಡೆದು ಸೀಲ್ (ಮೊಹರು) ಹಾಕಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲಿಯೇ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಹೋಟೆಲ್ ಬೇಕೇ ಅಥವಾ ಜಿಲ್ಲಾಡಳಿತದಿಂದ ನಡೆಯುತ್ತಿರುವ ಕ್ವಾರಂಟೈನ್ ಕೇಂದ್ರಕ್ಕೆ ತೆರಳುತ್ತೀರಾ ಎಂಬ ಮಾಹಿತಿ ಪಡೆದು, ಅವರ ಆಯ್ಕೆ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಆಯ್ಕೆಯನ್ನು ಹೊರ ರಾಜ್ಯದಿಂದ ಬಂದವರಿಗೇ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.