ವಿದ್ಯುನ್ಮಾನ ಮತಯಂತ್ರದಲ್ಲಿ ದೋಷವಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋತರೆ ಇವಿಎಂ ದೋಷ ಎನ್ನುತ್ತಾರೆ. ಅದೇ ರಾಹುಲ್ ಕೇರಳದಲ್ಲಿ ಗೆದ್ದಾಗ ಇವಿಎಂ ಸರಿಯಾಗಿರುತ್ತದೆ. ದಕ್ಷಿಣ ಕನ್ನಡದಲ್ಲಿ ಏಳು ಜನ ಬಿಜೆಪಿ ಶಾಸಕರು ಗೆದ್ದಾಗ ಇವಿಎಂ ಹಾಳಾಗಿರುತ್ತದೆ. ಕಾಂಗ್ರೆಸ್ನ ಯು.ಟಿ. ಖಾದರ್ ಗೆದ್ದಾಗ ಸರಿಯಾಗಿರುತ್ತದೆ. ಮಲ್ಲಿಕಾರ್ಜುನ ಖರ್ಗೆ ಸೋತಾಗ ಇವಿಎಂ ದೋಷ ಕಾರಣ, ಪ್ರಿಯಾಂಕ ಖರ್ಗೆ ಗೆದ್ದಾಗ ಅದೇ ಇವಿಎಂ ಸರಿಯಾಗಿರುತ್ತದೆ. ಸೋತಿದ್ದಕ್ಕೆಲ್ಲ ಇವಿಎಂ ಕಾರಣ, ಗೆದ್ದಿದ್ದಕ್ಕೆಲ್ಲ ನೀವು ಕಾರಣ ಎಂದರೆ ಏನಿದರ ಅರ್ಥ?’ ಎಂದು ಪ್ರಶ್ನಿಸಿದರು.