ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುತ್ತಿಗೆ ಹಿಡಿದು ತಳ್ಳಿದರೂ ಎಚ್‌ಡಿಕೆ ಅಧಿಕಾರ ಬಿಡಲ್ಲ’

Last Updated 29 ಜನವರಿ 2019, 1:45 IST
ಅಕ್ಷರ ಗಾತ್ರ

ಕೊಪ್ಪಳ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಮಾನ ಇದ್ದರೆ ರಾಜೀನಾಮೆ ನೀಡಲಿ. ಅದು ಇಲ್ಲದಿದ್ದರೆ ಅಧಿಕಾರ ಇಟ್ಟುಕೊಳ್ಳಲಿ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿಯನ್ನು ಕುತ್ತಿಗೆ ಹಿಡಿದು ದಬ್ಬಿದರೂ ಅಧಿಕಾರ ಬಿಟ್ಟುಕೊಡುವುದಿಲ್ಲ. ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಮಾನ, ಮಾರ್ಯಾದೆ ಇಲ್ಲದವರನ್ನು ಏನು ಎನ್ನಬೇಕು ಎಂದು ಜರಿದರು.

ಇದು ಅಧಿಕಾರ ಹಪಾಹಪಿಯ ಪರಿಣಾಮವಾಗಿದೆ.ಕಾಂಗ್ರೆಸ್‌ನವರಿಗೆ ಬೇರೆ ಗತಿ ಇಲ್ಲ. ಹೀಗಾಗಿ, ಕುಮಾರಸ್ವಾಮಿ ಅವರನ್ನು ಒ‍ಪ್ಪಿಕೊಳ್ಳಲೇಬೇಕು.ಇಂತಹ ಪರಿಸ್ಥಿತಿಯಿಂದಲೇ ಅವರು ಆಟವಾಡುತ್ತಿದ್ದಾರೆ. ಇವರ ಅಧಿಕಾರದ ದಾಹ ಎಷ್ಟಿದೆ ಎನ್ನುವುದನ್ನು ರಾಜ್ಯದ ಜನ ನೋಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT