ಆದರೆ, ಅಂಕಪಟ್ಟಿ ನೀಡಿದ 2 ವರ್ಷಗಳ ಬಳಿಕ ವಿ.ವಿ.ಯು ಶ್ರೀನಿವಾಸ ಅವರಿಗೆ ಪತ್ರ ಬರೆದಿತ್ತು. ‘ಮರುಮೌಲ್ಯಮಾಪನ ದೋಷದಿಂದ ಕೂಡಿದ್ದು, ನೀವು ಅನುತ್ತೀರ್ಣರಾಗಿದ್ದೀರಿ. ಹಾಗಾಗಿ, ಅಂಕಪಟ್ಟಿಯನ್ನು ವಾಪಸು ಮಾಡಬೇಕು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಒಟ್ಟು ಮೂರು ಬಾರಿ ಮೌಲ್ಯಮಾಪನ ಮಾಡಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದರೆ ಮಾತ್ರ ಅಂಕ ಪಟ್ಟಿ ನೀಡಲಾಗುತ್ತದೆ. ವಿ.ವಿ.ಯ ಆಂತರಿಕ ದೋಷದಿಂದಾಗಿ ಉತ್ತೀರ್ಣರಾಗಿದ್ದೀರಿ ಎಂದು ಅಂಕ ಪಟ್ಟಿ ನೀಡಿದ್ದು, ವಾಪಸು ಕೊಡಬೇಕು’ ಎಂದು ಕೋರಲಾಗಿತ್ತು.