ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಹೊಸ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಲ್ಲಿ ನಾಡಿನ ಆರು ಕೋಟಿ ಜನರ ಪರವಾಗಿ ಮಾಡುವ ವಿನಂತಿ ಎಂದರೆ ಮೊದಲು ಕಚ್ಚಾಟ ನಿಲ್ಲಿಸಿ, ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ.
ಜನರಿಗೆ ನೀರು, ವಿದ್ಯುತ್ ಒದಗಿಸಿ. ಉತ್ತಮ ರಸ್ತೆಗಳನ್ನು ನಿರ್ಮಿಸಿ. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಲಿ. ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸಿರಿ.
ಜನಪ್ರತಿನಿಧಿಗಳೆಲ್ಲರೂ ಬೆಂಗಳೂರಿನಲ್ಲೇ ಉಳಿಯದೆ, ತಮ್ಮ ಕ್ಷೇತ್ರಗಳಲ್ಲಿ ನಿಂತು ಕೆಲಸ ಮಾಡುವಂತಾಗಲಿ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ವಿಚಾರಗಳ ಕಡೆಗೆ ಗಮನಹರಿಸಿದರೆ ಮಾತ್ರ ಮತದಾರರ ಮನ್ನಣೆಗೆ ಪಾತ್ರರಾಗುವರು.