ಮುಂಗಡ ಹಣ ವಾಪಸ್:ತೀವ್ರ ಮಳೆಗೆ ತುತ್ತಾಗಿದ್ದ ಪ್ರದೇಶಗಳಿಗೆ ಬಸ್ ಸಂಚಾರ ರದ್ದುಗೊಂಡು,ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೂ ಹಣ ವಾಪಸ್ ನೀಡಲಾಗಿದೆ. ಕೆಲವೆಡೆ ಸಂಸ್ಥೆಯೇ ಬಸ್ ಸಂಚಾರ ರದ್ದುಗೊಳಿಸಿ ಮುಂಗಡ ಹಣ ವಾಪಸ್ ನೀಡಿದ್ದರೆ, ಇನ್ನೂ ಕೆಲವರು ಅತಿವೃಷ್ಟಿ ಪ್ರದೇಶಕ್ಕೆ ಪ್ರಯಾಣ ಬೆಳೆಸದೆ ಮುಂಗಡ ಟಿಕೆಟ್ ಹಣ ಹಿಂಪಡೆದಿದ್ದಾರೆ. ಆಗಸ್ಟ್ 4ರಿಂದ 11ರ ವರೆಗೆ 38,872 ಮಂದಿ ಮುಂಗಡ ಟಿಕೆಟ್ ರದ್ದು ಪಡಿಸಿದ್ದರು. ₹2.24 ಕೋಟಿ ಜನರಿಗೆ ಮರಳಿಸಲಾಗಿದೆ.