ಶನಿವಾರ ಇಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ‘ಕೊಪ್ಪಳ ವಿಭಾಗದ ಚಾಲಕನ ಮಗಳು ಮೃತಪಟ್ಟಿದ್ದರೂ ವಿಷಯ ತಿಳಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಕೊನೆ ಬಾರಿ ಮಗಳ ಮುಖ ನೋಡುವ ಭಾಗ್ಯ ಆ ಚಾಲಕನಿಗೆ ಇಲ್ಲವಾಯಿತು. ಮೊಬೈಲ್ ದೂರವಾಣಿ ಇಟ್ಟುಕೊಂಡರೆ ಅಮಾನತುಗೊಳಿಸುವುದಾಗಿ ಅಧಿಕಾರಿಗಳು ಆದೇಶಹೊರಡಿಸಿರುವುದೇ ಇದಕ್ಕೆ ಕಾರಣ’ ಎಂದರು.