ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಸುಮಾರು ₹3.83 ಕೋಟಿ ಕಡಿಮೆಯಾಗಿದೆ. ಇದಕ್ಕೆ ಮುಖ್ಯಕಾರಣ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟ್ ರಸ್ತೆಗಳು ಎರಡೂವರೆ ತಿಂಗಳು ಬಂದ್ ಆಗಿದ್ದವು. ಸುಬ್ರಹ್ಮಣ್ಯಸ್ವಾಮಿಯ ಭಕ್ತರು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರಿಂದ, ಆದಾಯ ₹65 ಲಕ್ಷ ಹೆಚ್ಚಿದೆ.