ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ: ಅನಿತಾ ಕುಮಾರಸ್ವಾಮಿ

Last Updated 5 ನವೆಂಬರ್ 2018, 8:45 IST
ಅಕ್ಷರ ಗಾತ್ರ

ಹಾಸನ: ‘ಹಾಸನಾಂಬೆಯ ಆಶೀರ್ವಾದದಿಂದ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ’ ಎಂದುಅನಿತಾ ಕುಮಾರಸ್ವಾಮಿ ಹೇಳಿದರು.

ಹಾಸನಾಂಬೆಯ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ದೇವರ ಮೇಲೆ ಅತೀವ ನಂಬಿಕೆ ಇದೆ.ಆ ಕಾರಣಕ್ಕೆ ಪ್ರತಿವರ್ಷ ಇಲ್ಲಿಗೆ ಬರುತ್ತೇನೆ. ಕುಮಾರಸ್ವಾಮಿ ಅವರಿಗೆಇನ್ನೂ ಹೆಚ್ಚಿನ ಶಕ್ತಿ ಕೊಟ್ಟು ಸಿಕ್ಕಿರುವ ಮುಖ್ಯಮಂತ್ರಿ ಸ್ಥಾನವನ್ನು ಉಳಿಸುಎಂದು ಬೇಡಿಕೊಂಡಿದ್ದೇನೆ. ಹಾಗೆಯೇ ನಾಡಿನ ಜನರಿಗೆ ಸುಖ ಶಾಂತಿ ಸಿಗಲಿ.ರೈತರ ಸಂಕಷ್ಡ ಬಗೆಹರಿಸು ಎಂದು ಪ್ರಾರ್ಥಿಸಿದ್ದೇನೆ’ ಎಂದರು.

‘ರಾಮನಗರದಲ್ಲಿ ಗೆಲ್ಲುವ ವಿಶ್ವಾಸ ಇದೆ.ಉಳಿದ ನಾಲ್ಕೂ ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಒಲಿಯುತ್ತದೆ ಎನ್ನುವ ವಿಶ್ವಾಸವಿದೆ. ಪುತ್ರ ನಿಖಿಲ್ ಚುನಾವಣಾ ರಾಜಕೀಯಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ.ಮುಂದೆ ಏನಾಗುತ್ತದೆಯೋಗೊತ್ತಿಲ್ಲ.ನಾನೂ‌ ಕೂಡ ರಾಜಕೀಯಕ್ಕೆ ಬರುವೆ ಅಂದು ಕೊಂಡಿರಲಿಲ್ಲ’ ಎಂದು ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್‌ ತುಂಬಾಕ್ರೀಯಾಶೀಲವಾಗಿ‌ ಕೆಲಸ ಮಾಡಿದ್ದಾನೆ.ಹಾಗಾಗಿ ಅವನು ರಾಜಕೀಯಕ್ಕೆ ಬರಬೇಕೆಂಬ ಎಂಬ ಒತ್ತಾಯ ಇದೆ.ಅವನು‌ ಏನೇ‌ ಒಳ್ಳೆ ಕಾರ್ಯ ಮಾಡಿದ್ರೂ ನನ್ನ‌ ಆಶೀರ್ವಾದ ಇರುತ್ತೆ’ ಎಂದು ಹೇಳಿದರು.

‘ನಿಖಿಲ್ ಹಾಗೂ ಪ್ರಜ್ವಲ್ ಪೈಕಿ ಯಾರಿಗೆ ದೇವರ ಆಶೀರ್ವಾದ, ಜನರ ಬೆಂಬಲ ಯಾರಿಗೆ ಇರುತ್ತದೆಯೊ ಅವರು ಗೆಲ್ಲುತ್ತಾರೆ.ರೈತರಿಗೆ ಬ್ಯಾಂಕ್ ಕಿರುಕುಳ ಆಗುತ್ತಿರುವುದನ್ನು ಮುಖ್ಯಮಂತ್ರಿ ಸರಿಪಡಿಸುತ್ತಾರೆ’ ಎಂದು ಭರವಸೆ ಮಾತುಗಳನ್ನು ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT