ಗೌಂಡಮಣಿ, ವೀರಮ್ಮ, ಸೆಲ್ವಿ, ನಾಗಮಣಿ, ಉಮಾ, ನಿರ್ಮಲಾ ಮತ್ತು ಕಾಳಿದಾಸ ಮೃತಪಟ್ಟವರು. ಮೃತರು 30ರಿಂದ 35 ವರ್ಷದ ಒಳಗಿನವರಾಗಿದ್ದು ಬೆಂಗಳೂರಿನ ಸಂಜಯನಗರದ ನಿವಾಸಿಗಳಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಕಾರು ಚಾಲಕ ಯೋಗೀಶ್, ಭವಾನಿ ಹಾಗೂ ಪಂಚಾಲಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಒಂದೂವರೆ ವರ್ಷದ ಸಾಧಿಕ್ಗೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.