ಬೆಂಗಳೂರು: ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಕೃಷ್ಣ ಬೈರೇಗೌಡ ಸಹಿತ ಹಲವು ಪ್ರಮುಖರು ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಹೂಗುಚ್ಛ ನೀಡುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಸ್ವಾಗತ ಕೋರಿದರು.
ಗಡ್ಡ ಬಿಟ್ಟ ಡಿಕೆಶಿ: ಡಿಕೆಶಿ ಅವರು ಜೈಲಿನಲ್ಲಿ ಇದ್ದಾಗ ಶೇವ್ ಮಾಡಿಕೊಂಡಿಲ್ಲ. ಗಡ್ಡದೊಂದಿಗೇ ಅವರು ಜೈಲಿನಿಂದ ಹೊರಗೆ ಬಂದಿದ್ದು, ಬೆಂಗಳೂರಿಗೆ ಬಂದಿಳಿಯುವಾಗ ಸಹ ಅವರು ಶೇವ್ ಮಾಡಿಕೊಂಡಿಲ್ಲ. ಬಹುಶಃ ಮನೆ ದೇವರ ದರ್ಶನ ಮಾಡಿದ ಬಳಿಕ ಶೇವ್ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.