‘ಸರ್ಕಾರದ ಎದುರು ಭಿಕ್ಷೆ ಬೇಡಿದರೂ ಕಣ್ಣು ತೆರೆಯುತ್ತಿಲ್ಲ. ಬಿಜೆಪಿಯವರು ಜನರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಶಾಸಕರನ್ನು ಖರೀದಿಸಿ, ವಿಮಾನದಲ್ಲಿ ಕರೆದೊಯ್ಯುವುದಕ್ಕೆ, ಸ್ಟಾರ್ ಹೋಟೆಲ್ನಲ್ಲಿ ಅವರನ್ನು ಉಳಿಸುವುದಕ್ಕೆ ಹಣವಿತ್ತು. ಸಂತ್ರಸ್ತರಿಗೆ ಪರಿಹಾರ ಕೊಡಲು ಹಣವಿಲ್ಲವೇ? ಈ ಸರ್ಕಾರಕ್ಕೆ ದೃಷ್ಟಿ ಇಲ್ಲ, ಶ್ರವಣ ಶಕ್ತಿಯೂ ಇಲ್ಲ’ ಎಂದು ಟೀಕಿಸಿದರು.