ಮೊಳಕಾಲ್ಮುರು: ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ಚಿರತೆ ದಾಳಿ ನಡೆಸಿ ಮೂವರು ಗಾಯಗೊಂಡಿದ್ದಾರೆ.
ಬಿ.ಜಿ.ಕೆರೆ ಗ್ರಾಮದ ಅನ್ವರ್, ಅಜ್ಜಪ್ಪ ಹಾಗೂ ಗೋವಿಂದಪ್ಪ ಗಾಯಗೊಂಡವರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆ 8.30ರ ಸುಮಾರಿಗೆ ಅನ್ವರ್ ಅವರು ಸಮಿಲ್ಗೆ ಹೋಗುವಾಗಚಿರತೆ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ.ಸಮೀಪದಲ್ಲೇ ಕೂಲಿ ಕೆಲಸ ಮಾಡುತ್ತಿದ್ದ ಅಜ್ಜಪ್ಪ ಹಾಗೂ ಗೋವಿಂದಪ್ಪ ಬೆದರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರ ಮೇಲೂ ದಾಳಿ ನಡೆಸಿದೆ.
ಗ್ರಾಮಕ್ಕೆ ಸಮೀಪದ ಪೊದೆಯಲ್ಲಿ ಅಡಗಿಕೊಂಡಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿಸಿಎಫ್ ಮಂಜುನಾಥ್ ಸ್ಥಳಕ್ಕೆ ತೆರಳಿದ್ದಾರೆ.