ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನನ್ನು ಕೊಂದ ಚಿರತೆ

Last Updated 11 ಡಿಸೆಂಬರ್ 2018, 17:06 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ, ಮೂರು ವರ್ಷದ ಬಾಲಕನನ್ನು ಚಿರತೆಯೊಂದು ಹೊತ್ತೊಯ್ದು, ಸಾಯಿಸಿದೆ.

‘ಗ್ರಾಮದ ಬುಡ್ಗ ಜಂಗಮ ಸಮುದಾಯದ ಅಶ್ವ ರಾಘವೇಂದ್ರ–ಮಮತಾ ಅವರ ಮಗ ವೆಂಕಟಸ್ವಾಮಿ, ಮಂಗಳವಾರ ಸಂಜೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಬಂದ ಚಿರತೆ ಆತನನ್ನು ಹೊತ್ತುಕೊಂಡು ಹೋಯಿತು. ಬಾಲಕನ ತಾಯಿ ಹಾಗೂ ಗ್ರಾಮಸ್ಥರು ಬೆನ್ನಟ್ಟಿ ಹೋದರು. ಮುಳ್ಳಿನ ಪೊದೆಯಲ್ಲಿ ಸುಮಾರು ಅರ್ಧ ತಾಸು ಹುಡುಕಾಡಿದ ನಂತರ ಬಾಲಕನ ಶವ ಪತ್ತೆಯಾಯಿತು’ ಎಂದು ಪ್ರತ್ಯಕ್ಷದರ್ಶಿ ಎಸ್‌.ಕೆ.ಬಸವರಾಜ ತಿಳಿಸಿದರು.

ಎರಡು ತಿಂಗಳ ಹಿಂದೆ ಗ್ರಾಮದ ಕುರಿ ಹಟ್ಟಿ ಮೇಲೆ ದಾಳಿ ನಡೆಸಿದ್ದ ಚಿರತೆ, ಎಂಟು ಕುರಿ ಮರಿಗಳನ್ನು ಕೊಂದು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT