ಅದರ ಬೆನ್ನಿಗೇ, ತಾಲ್ಲೂಕಿನ ಮೆಟ್ರಿ ಗ್ರಾಮದ ನಾಗಲಿಂಗಪ್ಪನ ಗವಿಯ ಬಳಿ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮೆಟ್ರಿ ಗ್ರಾಮದ ದಿನೇಶ್ ಮತ್ತು ಸ್ವಾಮಿ ಭಾನುವಾರ ಬೆಳಿಗ್ಗೆ 7ರ ಸುಮಾರಿಗೆ ಗುಡ್ಡದಿಂದ ಕುರಿಗಳಿಗೆ ಹಸಿರು ತೊಪ್ಪಲು ತೆಗೆದುಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿದೆ.