ತಾಯಿ ಹತ್ತಿ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಅಲ್ಲಿಯೇ ಇದ್ದ ಜಯಸುಧಾ ಮೇಲೆ ಚಿರತೆ ಎರಗಿದೆ. ಅದನ್ನು ನೋಡಿ ವನಜಾಕ್ಷಿ ಕಿರುಚಾಡಿದ್ದಾರೆ. ಅದನ್ನು ಕಂಡ ರೈತರು, ಕೃಷಿ ಕೂಲಿ ಕಾರ್ಮಿಕರು ಧಾವಿಸಿ, ಚಿರತೆ ಮೇಲೆ ಕಲ್ಲು ಎಸೆದಿದ್ದಾರೆ. ಅದರಿಂದ ಹೆದರಿದ ಚಿರತೆ ಜಯಸುಧಾ ದೇಹವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಕಂಪ್ಲಿ ಆಸ್ಪತ್ರೆಗೆ ಕರೆದೊಯ್ಯು ಮಾರ್ಗ ಮಧ್ಯೆ ಬಾಲಕಿ ಅಸುನೀಗಿದ್ದಾಳೆ.