ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಬಾಲಕನನ್ನು ಬಲಿ ಪಡೆದ ಚಿರತೆ ಶನಿವಾರ ಮಧ್ಯಾಹ್ನ ದಿಢೀರ್ ಪ್ರತ್ಯಕ್ಷವಾಗಿದೆ.
ಗ್ರಾಮದ ಎರದಮಟ್ಡಿ ಪ್ರದೇಶದಲ್ಲಿ ಜೆಸಿಬಿ ಯಂತ್ರದಿಂದ ಬೇಲಿ ಪೊದೆ ತೆರವುಗೊಳಿಸುತ್ತಿದ್ದ ಚಾಲಕ ಈರಣ್ಣ ಅವರಿಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಭೀತಿಯಿಂದ ಗ್ರಾಮದ ವಸತಿ ಪ್ರದೇಶಕ್ಕೆ ಧಾವಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದರು.
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಮುಳ್ಳು ಪೊದೆಯಲ್ಲಿ ಚಿರತೆ ಮರಿಗಳು ಇವೆ ಎನ್ನಲಾಗಿದ್ದು. ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ.