‘ಮುಂಬೈ ಕರ್ನಾಟಕಕ್ಕೆ ಒದಗಿರುವ ಇಂದಿನ ಸಂಕಷ್ಟದ ಸ್ಥಿತಿಯು ಒಂದು ವೇಳೆ ದಕ್ಷಿಣ ಕರ್ನಾಟಕಕ್ಕೆ, ವಿಶೇಷವಾಗಿ ಹಾಸನ, ಮಂಡ್ಯ, ಮೈಸೂರು, ಕೋಲಾರ ತುಮಕೂರು ಜಿಲ್ಲೆಗಳಿಗೆ ಬಂದಿದ್ದರೆ ತಾವು ಇದೇ ರೀತಿ ದಿವ್ಯ ನಿರ್ಲಕ್ಷ್ಯ ಮಾಡುತಿದ್ದಿರಾ? ಕೃಷ್ಣಾ ನದಿಗೆ ನೀರು ಬಿಡಿಸುವ ಸಂಬಂಧ ಸರ್ವ ಪಕ್ಷದ ನಿಯೋಗವನ್ನು ಈ ವೇಳೆಗಾಗಲೇ ಮುಂಬೈಗೆ ಕಳುಹಿಸಬೇಕಾಗಿತ್ತು. ಒತ್ತಡ ತರಬೇಕಾಗಿತ್ತು. ಆದರೆ, ತಮ್ಮ ಸರ್ಕಾರ ಕೇವಲ ಪತ್ರಗಳನ್ನು ಬರೆಯವುದರಲ್ಲೇ ಕಾಲಹರಣ ಮಾಡುತ್ತಿದೆ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ. ಈ ಸತ್ಯ ತಮಗೂ ಗೊತ್ತಿದೆ’.