‘ಕೂಡ್ಲಿಗಿ ಗ್ರಾಮದ ಚಿಕ್ಕಜೋಗಿಹಳ್ಳಿ ಗ್ರಾಮದಸವಿತಾಬಾಯಿ ಹಾಗೂ ಚನ್ನಪ್ಪ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಷಯ ಸವಿತಾಬಾಯಿ ಗಂಡ ಮುದ್ದಪ್ಪ ಅವರಿಗೆ ಗೊತ್ತಾಗಿತ್ತು. ಈ ಕುರಿತು ಮುದ್ದಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. 2014ರ ಜೂನ್ 14ರಂದು ರಾತ್ರಿ 10.30ರ ಸಮಯದಲ್ಲಿ ಮುದ್ದಪ್ಪ ಮಲಗಿದ್ದಾಗ ಸವಿತಾಬಾಯಿ, ಚನ್ನಪ್ಪ ಹಾಗೂ ಮಹಾಬಲೇಶ್ವರಪ್ಪ ಎಂಬುವರು ಸೇರಿಕೊಂಡು, ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಶವವನ್ನು ಗುಂಡುಮುಣುಗು ಗ್ರಾಮದ ರಸ್ತೆ ಬದಿ ಎಸೆದು, ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಿದ್ದರು’ ಎಂದು ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ತಿಳಿಸಿದರು.