ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಿಡಿಲು ಬಡಿದು ರೈತ ಸಾವು

Last Updated 6 ಜೂನ್ 2019, 11:16 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ರಾತ್ರಿ ಮಳೆಯಾಗಿದ್ದು, ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ಸಿಡಿಲಿಗೆ ರೈತ ಸಿದ್ದಪ್ಪ (32) ಮೃತಪಟ್ಟಿದ್ದಾರೆ.

ಸಿದ್ದಪ್ಪ, ಶಿವರಾಜ ಹಾಗೂ ರಾಜಪ್ಪ ಎಂಬುವರು ಹೊಲದಲ್ಲಿ ನೀರು ಕಟ್ಟಲು ಹೋಗಿದ್ದಾರೆ. ಈ ವೇಳೆ ಗುಡುಗು, ಮಿಂಚಿನ ಸಮೇತ ಮಳೆ ಆರಂಭವಾಗಿದೆ. ಈ ವೇಳೆ ಮನೆಗೆ ಹಿಂತಿರುಗುವಾಗ ಸಿಡಿಲು ಬಡಿದಿದ್ದು, ಸಿದ್ದಪ್ಪ ಸ್ಥಳದಲ್ಲೇ ಮೃತಪಟ್ಟರೆ, ಶಿವರಾಜ ಹಾಗೂ ರಾಜಪ್ಪ ಅವರಿಗೆ ಸಣ್ಣ ಗಾಯಗಳಾಗಿವೆ. ಮಹಾದೇವಪ್ಪ ಎಂಬುವರಿಗೆ ಸೇರಿದ ಎತ್ತು ಕೂಡ ಬಲಿಯಾಗಿದೆ.

ಹೊಸಪೇಟೆ, ಕಂಪ್ಲಿ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಾಗಿದ್ದು, ವಾತಾವರಣ ತಂಪಾಗಿತ್ತು. ಇದರಿಂದ ಬಿತ್ತನೆ ಚುರುಕುಗೊಂಡಿದೆ. ಎರಡ್ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೇಲಿಂದ ಮೇಲೆ ಮಳೆ ಆಗುತ್ತಿರುವ ಕಾರಣ ಬಿಸಿಲಿನ ತಾಪಮಾನ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT