ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ಧರ್ಮಕ್ಕೆ ಯಾರೂ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕಾಗಿಲ್ಲ. ಅದು ಯಾವತ್ತೊ ಸ್ವತ್ರಂತ್ರ ಧರ್ಮ ಆಗಿದೆ. ವಾಸ್ತವದಲ್ಲಿ ಅದರ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ ಅಗಬೇಕು. ಅಲ್ಲದೆ, ವಚನಗಳಲ್ಲಿ ಕಲಬೆರಕೆ ಆಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದೆ’ ಎಂದು ಹೇಳಿದರು.