ಪಿ.ಜಿ.ಆರ್.ಸಿಂಧ್ಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಸಮಾಜದ ಮುಖಂಡರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಈಗಲೂ ಮರಾಠರು ಅವರ ಮಾತಿಗೆ ಬೆಲೆ ಕೊಡುತ್ತಾರೆ. ಬಸವಕಲ್ಯಾಣದಲ್ಲಿ ಮರಾಠರು ಸಹಜವಾಗಿಯೇ ಅವರನ್ನು ಬೆಂಬಲಿಸಬಹುದು. ಅಷ್ಟೇ ಅಲ್ಲ, ಬಸವಕಲ್ಯಾಣ ರಾಜಕೀಯ ಭಾಲ್ಕಿ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಎಂದು ಮರಾಠಾ ಸಮಾಜದ ಮುಖಂಡರು ಆಡಿಕೊಳ್ಳುತ್ತಿದ್ದಾರೆ.