ಮೈಸೂರು ಮಾರ್ಗದ ಕೊಪ್ಪ, ಹಾಸನ ಮಾರ್ಗದ ಶಿರಂಗಾಲ ಹಾಗೂ ಕೊಡ್ಲಿಪೇಟೆ, ಮಂಗಳೂರು ಮಾರ್ಗದ ಸಂಪಾಜೆಯಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದ್ದು ದಿನ 24 ಗಂಟೆಯೂ ಪೊಲೀಸರು ನಿಗಾ ಇಟ್ಟಿದ್ದಾರೆ. ಜಿಲ್ಲೆಯ ಹೊರಗೆ ಹಾಸ್ಟೆಲ್ನಲ್ಲಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಒಳಬರಲು ಅವಕಾಶ ಕಲ್ಪಿಸಲಾಗಿದೆ. ಅನಿವಾರ್ಯ ಕಾರಣಕ್ಕೆ ಜಿಲ್ಲೆ ಪ್ರವೇಶಿಸುವ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿ ಪ್ರವೇಶ ನೀಡಲಾಗುತ್ತಿದೆ.