ಸ್ಥಳೀಯ ನಿವಾಸಿ ಹುಲಿಗೆಪ್ಪ ಕನಕಗಿರಿ ಮಾತನಾಡಿ, 'ಎಲ್ಲವನ್ನೂ ಸರ್ಕಾರವೇ ಮಾಡಬೇಕು. ಪೊಲೀಸರು, ವೈದ್ಯರೇ ಮಾಡಬೇಕು ಎಂದರೆ ಆಗದು. ಸಾಂಕ್ರಾಮಿಕ ರೋಗ ಹರಡಬಹುದಾದ ಈ ತುರ್ತು ಪರಿಸ್ಥಿತಿಯಲ್ಲಿ ನಾವೂ ಎಚ್ಚೆತ್ತುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ' ಎಂದರು.ಮಹೇಶ ದೇಶಪಾಂಡೆ, ಸಂಜಯ, ಪಾಂಡುರಂಗ, ಸತೀಶ್, ಆನಂದ, ರಾಘವೇಂದ್ರ ದೇಶಮುಖ, ನಾಗೇಶ್, ಸಂತೋಷ ಕುಲಕರ್ಣಿ, ಪ್ರಮೋದ್ ಷಹಾ, ಶುಭಂ ದೇಶಮುಖ, ಕಸ್ತೂರಚಂದ್ ಕಾಸರ್ ಇದ್ದರು.ಈ ಕ್ರಮಕ್ಕೆ ಬಡಾವಣೆಯ ಎಲ್ಲ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.