ಮೈಸೂರು ತಾಲ್ಲೂಕಿನ ಕೆಂಚಲಗೂಡು, ಮಂಡಕಳ್ಳಿ, ಕಲ್ಲೂರು ನಾಗನಹಳ್ಳಿಗಳಲ್ಲಿ ರೈತರು ತಾವೇ ಬೆಳೆದ ರಾಗಿ, ಅಕ್ಕಿ, ತೆಂಗಿನಕಾಯಿ, ಇತರ ಧಾನ್ಯ ಹಾಗೂ ತರಕಾರಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಆಹಾರ ಪದಾರ್ಥಗಳಿಗಾಗಿ ಅಂಗಡಿಗಳ ಮುಂದೆ ಗುಂಪುಗೂಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗುತ್ತಿದ್ದಾರೆ.