ನಗರದಲ್ಲಿ ವಿವಿಧ ದರ್ಜೆಯ 90 ಹೋಟೆಲ್ಗಳನ್ನು ಜಿಲ್ಲಾಡಳಿತದ ಅಧಿಕಾರಿಗಳು ಈಗಾಗಲೇ ಕಾಯ್ದಿರಿಸಿದ್ದಾರೆ. ಅವುಗಳಲ್ಲಿ 4,700 ಮಂದಿ ಕ್ವಾರಂಟೈನ್ನಲ್ಲಿ ಇರಲು ಅವಕಾಶ ಇದೆ. ಎಲ್ಲರನ್ನು ನೇರವಾಗಿ ಅಲ್ಲಿಗೆ ಕರೆದೊಯ್ಯಲು ಬಿಎಂಟಿಸಿ ಬಸ್ಗಳು ಸಜ್ಜಾಗಿ ನಿಂತಿವೆ.
ಕೊಠಡಿ ಬಾಡಿಗೆ ಮತ್ತು ಆಹಾರದ ವೆಚ್ಚವನ್ನು ಕ್ವಾರಂಟೈನ್ನಲ್ಲಿ ಇರುವವರೇ ಭರಿಸಬೇಕು. ಹೀಗಾಗಿ, ಯಾವ ದರ್ಜೆಯ ಹೋಟೆಲ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಬಡವರಿದ್ದರೆ ಅವರನ್ನು ಸರ್ಕಾರಿ ಹಾಸ್ಟೆಲ್, ಸಮುದಾಯಭವನಗಳಲ್ಲಿ ಇರಿಸಲಾಗುವುದು. ಅವರಿಗೆ ಊಟದ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ದೆಹಲಿಯಿಂದ ಬಂದವರನ್ನು ಭೇಟಿ ಮಾಡಲು ಸಂಬಂಧಿಕರು ಜಮಾಯಿಸಿದ್ದಾರೆ. ಆದರೆ, ಭೇಟಿಗೆ ಅಧಿಕಾರಿಗಳುಅವಕಾಶ ನೀಡಿಲ್ಲ.