ರೋಹನ್ (17) ಬೀರೂರಿನ ರಾಜಾಜಿನಗರದ ಕಾತ್ಯಾಯಿನಿ ಎಂಬುವವರ ಒಬ್ಬನೇ ಮಗ. ರೋಹನ್ ತಂದೆ ಶಿಕ್ಷಕರಾಗಿದ್ದು, ಎರಡು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು. ರೋಹನ್ ಬೀರೂರಿನವಳೇ ಆದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಹುಡುಗಿಯ ಸಂಬಂಧಿಕರೇ ಆದ ಅಶ್ವಿನ್ ಮತ್ತು ಜೀವನ್ ಇಬ್ಬರೂ ರೋಹನ್ ಮಂಗಳವಾರ ಕಾಲೇಜು ಮುಗಿಸಿಕೊಂಡು ಕಾಲೇಜಿನ ಬಸ್ನಲ್ಲಿ ಬೀರೂರಿಗೆ ಹೊರಡುವ ಮುಂಚೆ ಆತನನ್ನು ಕರೆದು ಅಲ್ಲಿಯೇ ನಿಲ್ಲಿಸಿಕೊಂಡಿದ್ದ ಮಾರುತಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಎಮ್ಮೆದೊಡ್ಡಿಯಿಂದ ಬೀರೂರಿಗೆ ಹೋಗುವ ರಸ್ತೆಯಲ್ಲಿ ರೋಹನ್ನ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿ ಮೃತದೇಹವನ್ನು ಚೀಲದೊಳಗೆ ಹಾಕಿ ಲಿಂಗದಹಳ್ಳಿ ರಸ್ತೆಯ ಸಂತವೇರಿ ಬಳಿಯ ಸೇತುವೆ ಬಳಿ ಎಸೆದು ಹೋಗಿದ್ದರು.