ದಿಢೀರ್ ಎದುರಾದ ಚುನಾವಣೆ. ಸಮಯದ ಅಭಾವ ಸೋಲಿಗೆ ಪ್ರಮುಖ ಕಾರಣ. ಎರಡೂ ಪಕ್ಷಗಳು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿದರೂ ತಳ ಹಂತದ ಕಾರ್ಯಕರ್ತರನ್ನು ಮೈತ್ರಿ ಮನೋಸ್ಥಿತಿಗೆ ಸಜ್ಜುಗೊಳಿಸಲು ಸಮಯ ದೊರಕದ ಕಾರಣ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಈ ಒಗ್ಗಟ್ಟು ಮುಂದುವರಿಯಲಿದೆ. ಎರಡೂ ಪಕ್ಷಗಳ ಪ್ರಮುಖರು ಮುಂದಿನ ಅಭ್ಯರ್ಥಿ ನಿರ್ಧರಿಸಲಿದ್ದಾರೆ. ಎಲ್ಲರೂ ಈಗಿನಿಂದಲೇ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ಮಾಹಿತಿ ನೀಡಿದರು.