‘ವ್ಯಾಸರಾಜ ಮಠ, ರಾಘವೇಂದ್ರ ಮಠ, ಪೇಜಾವರ ಮಠ ಮತ್ತುಉತ್ತರಾದಿ ಮಠದ ಸ್ವಾಮಿಗಳು ಆನೆಗೊಂದಿಗೆ ತೆರಳುತ್ತಿದ್ದಾರೆ. ಸಂಜೆ ಅಲ್ಲಿಯೂ ಪ್ರತಿಭಟನೆ ನಡೆಸಲಾಗುವುದು. ನವಬೃಂದಾವನದ ಸ್ಥಳದ ಬಗ್ಗೆ ಉತ್ತರಾದಿ ಮಠ ಮತ್ತು ರಾಘವೇಂದ್ರ ಸ್ವಾಮಿಗಳ ಮಠಗಳ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಎಲ್ಲರೂ ವ್ಯಾಸರಾಜರ ಭಕ್ತರು. ಯಾವುದೇ ಮಠಕ್ಕೆ ಸೇರಿದವರು ಈ ಕೆಲಸ ಮಾಡಿಲ್ಲ. ಇದು ಕಿಡಿಗೇಡಿಗಳ ಕೃತ್ಯ. ಅಪರಾಧಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು’ ಎಂದು ಆಗ್ರಹಿಸಿದರು.