ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ತಮ್ಮ ರಾಜಕೀಯ ಜೀವನ ಕಳಂಕರಹಿತವಾದುದು ಎಂದರು. ಆಗ ಮಧ್ಯಪ್ರವೇಶಿಸಿದ ಭಾರ್ಗವ ‘ನಿಮ್ಮ ಸರ್ಕಾರ ಪತನದ ದಿನಗಣನೆ ಆರಂಭವಾಗಿದೆ’ ಎಂದು ಕುಟುಕಿದರು. ಆದರೆ, ಈ ಮಧ್ಯಪ್ರವೇಶಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಉರುಳಿಸುವುದಕ್ಕಾಗಿ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದರು. ‘ಕಾಂಗ್ರೆಸ್ ಶಾಸಕರು ಖರೀದಿಗಿಲ್ಲ’ ಎಂದು ಈ ವೇಳೆ ಕಮಲನಾಥ್ ಹೇಳಿದರು.