‘ಮೌಲ್ಯಮಾಪನ ಮಾಡುವುದು ಶಿಕ್ಷಕರ ಜವಾಬ್ದಾರಿ ಆಗಿದ್ದರೂ ಅವರಿಗೂ ಖಾಸಗಿ ಬದುಕಿದೆ. ಆರೋಗ್ಯ, ಪೂರ್ವನಿಯೋಜಿತ ಸಮಾರಂಭಗಳಂಥ ಅನಿವಾರ್ಯ ಕಾರಣಗಳಿಂದ ಗೈರಾದವರು ನಿಖರ ದಾಖಲೆ ನೀಡಿದರೆ ವಿನಾಯಿತಿ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಅವರು ಆಗ್ರಹಿಸಿದ್ದಾರೆ.