ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಂದೇಶಗಳನ್ನು ಬದುಕಿನ ಮಾರ್ಗವಾಗಿಸಿ ಕೊಂಡಿರುವ ಗುಗ್ಗುರಿ ಶಿವರುದ್ರಪ್ಪ ಜಯದೇವ ಅವರು ರಾಜ್ಯ ಸರ್ಕಾರ ನೀಡುವ 2019ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
₹ 5 ಲಕ್ಷ ನಗದು ಒಳಗೊಂಡ ಪ್ರಶಸ್ತಿಯನ್ನು ಗಾಂಧಿ ಜಯಂತಿ ದಿನದಂದು (ಅ.2) ಸಂಜೆ 5ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರದಾನ ಮಾಡುವರು.
2014ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಇದುವರೆಗೆ ಎಸ್. ಎನ್. ಸುಬ್ಬರಾವ್, ಚನ್ನಮ್ಮ ಹಳ್ಳಿಕೇರಿ, ಎಚ್. ಎಸ್. ದೊರೆಸ್ವಾಮಿ, ಹೋ. ಶ್ರೀನಿವಾಸಯ್ಯ, ವಿ. ಪ್ರಸನ್ನ ಅವರಿಗೆ ನೀಡಲಾಗಿದೆ.