‘ಜಾಗತಿಕ ಮಟ್ಟದ ಮಕ್ಕಳ ಸಾಹಿತ್ಯ ಮತ್ತು ಕನ್ನಡದ ಮಕ್ಕಳು’ ವಿಷಯವಾಗಿ ಮಾತನಾಡಿದ ಡಾ.ಆನಂದ ಪಾಟೀಲ, ‘ಕನ್ನಡದಂಥ ಪ್ರಾದೇಶಿಕ ಭಾಷಾ ವಲಯಗಳಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಇಂದಿನ ಮಕ್ಕಳು ಇಂಗ್ಲಿಷಿನಿಂದ ಕಳಚಿಕೊಳ್ಳಲಾರದ ಪರಿಸರದಲ್ಲಿದ್ದಾರೆ. ಪಾಶ್ಚಿಮಾತ್ಯದ ಓದು ನಮ್ಮ ಮಕ್ಕಳಲ್ಲಿ ವಿಭಿನ್ನ ನೆಲೆಯಲ್ಲಿ ನೋಡಲು ಸಿಗುತ್ತದೆ. ಮಕ್ಕಳಿಗೆ ವಿಸ್ತೃತ ಓದು ಇಂದಿನ ತೀರ ಅಗತ್ಯವೆನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.