ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ. ಗಾಯತ್ರಿ ಅವರು, ‘ದೀಪಾವಳಿ ಜಾತ್ರಾ ಮಹೋತ್ಸವ ಬಹಳ ಅಚ್ಚುಕಟ್ಟಾಗಿ ನೆರವೇರಿದೆ. ದೇವಾಲಯಕ್ಕೆ ಅಂದಾಜು 2.5 ಲಕ್ಷ ಭಕ್ತರು ಬಂದಿದ್ದಾರೆ. 2.5 ಲಕ್ಷದಿಂದ 3 ಲಕ್ಷಗಳಷ್ಟು ಲಡ್ಡು ಪ್ರಸಾದ ಮಾರಾಟವಾಗಿದೆ. ಚಿನ್ನದ ತೇರಿಗೆ ಸಂಬಂಧಿಸಿದಂತೆಒಂದರಿಂದ ಒಂದೂವರೆ ಸಾವಿರದಷ್ಟು ಟಿಕೆಟ್ಗಳು ವಿತರಣೆಯಾಗಿವೆ’ ಎಂದು ಮಾಹಿತಿ ನೀಡಿದರು.