ಪುಣೆಯಲ್ಲಿ ಟೆಕಿಯಾಗಿ ಕೆಲಸ ಮಾಡುತ್ತಿದ್ದಮದ್ದೂರು ತಾಲ್ಲೂಕು ತೈಲೂರು ನಿವಾಸಿ ಟಿ.ಎ. ಸೌಮ್ಯಾ (38) ಭಾನುವಾರ ಹೃದಯಾಘಾತದಿಂದನಿಧನರಾಗಿದ್ದರು. ಪತಿ ಶರತ್ ಪತ್ನಿಯ ಮೃತ ದೇಹ ಊರಿಗೆ ತರಲು ಮಂಡ್ಯ ಜಿಲ್ಲಾಡಳಿತದಿಂದ ಅನುಮತಿ ಕೇಳಿದ್ದರು. ಆದರೆ, ಸೌಮ್ಯಾ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂಶರತ್ ಅವರು ಸೌಮ್ಯಮೃತದೇಹವನ್ನು ಪುಣೆಯಿಂದ ಕರ್ನಾಟಕ ಗಡಿವರೆಗೆ ಭಾನುವಾರ ತಂದಿದ್ದರು.