ಈ ವರ್ಷ ತುಂಗಭದ್ರಾ ನದಿಯಲ್ಲಿ ನೀರು ಇರುವುದರಿಂದ ಭಕ್ತರು ಹರ್ಷಗೊಂಡಿದ್ದು, ಪುಣ್ಯಸ್ನಾನ ಮಾಡಿ ರಾಯರ ದರ್ಶನ ಪಡೆಯುತ್ತಿದ್ದಾರೆ. ವಯೋವೃದ್ಧರು ಮತ್ತು ಅಂಗವಿಕಲರಿಗೆ ನದಿದಡದಲ್ಲಿ ಸ್ನಾನ ಮಾಡುವುದಕ್ಕೆ ಪ್ರತ್ಯೇಕವಾಗಿ ನಳದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾರಾಧನೆ ಶನಿವಾರ ನಡೆಯಲಿದೆ. ಮಠದ ವಸತಿ ಸಮುಚ್ಚಯಗಳೆಲ್ಲ ಭರ್ತಿಯಾಗಿವೆ.