ನಗರದಲ್ಲಿ ಸೋಮವಾರ ಸಾಹಿತಿಗಳು ಹಾಗೂ ಕಲಾವಿದರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಎಂದು ನಾಮಕರಣವಾದ ಮೇಲೆ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದೆ. ಹಿಂದುಳಿದ ಪ್ರದೇಶ, ಒಣಭೂಮಿ ಎಂಬ ಭ್ರಮೆಯಲ್ಲೇ ಈ ಭಾಗವನ್ನು ಇನ್ನೂ ನೋಡಲಾಗುತ್ತಿದೆ. ನೈಜತೆ ಹೊರಚೆಲ್ಲುವ ಅಭಿವೃದ್ಧಿ, ಸಂಸ್ಕೃತಿ, ಸವಾಲುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗುವುದು’ ಎಂದರು.