ಎಚ್ಆರ್ಬಿಆರ್ ಬಡಾವಣೆ ಕಲ್ಯಾಣ ನಗರದಲ್ಲಿರುವ ಗೋದಾಮಿನ ಮೇಲೆ ಮಾರ್ಚ್ ಕೊನೆಯ ವಾರ ದಾಳಿ ಮಾಡಿದ ಸಿಸಿಬಿ ಆರ್ಥಿಕ ಅಪರಾಧಗಳ ವಿಭಾಗದ ಎಸಿಪಿ ಪ್ರಭುಶಂಕರ್ ಮತ್ತು ಅವರ ತಂಡದ
ಇನ್ಸ್ಪೆಕ್ಟರ್ಗಳು ₹20 ಲಕ್ಷ ಮೌಲ್ಯದ 12,000ಕ್ಕೂ ಹೆಚ್ಚು ನಕಲಿ ಎನ್95 ಮಾಸ್ಕ್ಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಕಂಪನಿ ಮಾಲೀಕರು ₹ 1.05 ಕೋಟಿ ಬೆಲೆಯ 70,000 ಮಾಸ್ಕ್ ಮಾರಿದ ಆರೋಪಕ್ಕೆ ಒಳಗಾಗಿದ್ದರು. ಈ ಬಗ್ಗೆ ಬಾಣಸವಾಡಿ
ಠಾಣೆಯಲ್ಲಿ (164/2020) ಪ್ರಕರಣ ದಾಖಲಾಗಿದೆ.