ವಿಷಯ ತಿಳಿದ ಪಾಲಕರು ಶನಿವಾರ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಶಿಕ್ಷಕ ತೊಂದರೆ ನೀಡಿದ್ದಾರೆ. ಕೆಲವು ಮಕ್ಕಳು ದಾರಿ ಮಧ್ಯದಲ್ಲಿ ಆಯಾಸದಿಂದ ಬಳಲಿದ್ದಾರೆ. ಸೇವಾದಳದ ಬಗ್ಗೆ ಸರಿಯಾಗಿ ಕಲಿಸದೇ ಬೇಜವಾಬ್ದಾರಿ ತೋರಿದ್ದಾರೆ’ ಎಂದು ಪಾಲಕರಾದ ಮರ್ದಾನಸಾಬ, ಪುಟ್ಟವ್ವ ಹಾಗೂ ಮಂಜುಳಾ ಆಚಾರಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶಿಕ್ಷಕ ದೀಪಕ್ ಲೋಕಣ್ಣವರ, ಪಾಲಕರಲ್ಲಿ ಕ್ಷಮೆ ಯಾಚಿಸಿದರು.