ಸಹಭಾಗಿತ್ವ: ‘ಅಸಮಾನತೆ ನಿರ್ಮೂಲನೆ, ಹೆಣ್ಣು ಭ್ರೂಣ ಹತ್ಯೆ ತಡೆ, ನಿರುದ್ಯೋಗ ಸಮಸ್ಯೆ, ಜಾತಿ ನಿಂದನೆ ತಡೆ ಸೇರಿದಂತೆ ಹಲವು ಸಾಮಾಜಿಕ ಸವಾಲುಗಳಿವೆ. ಜನರ ಸಹಭಾಗಿತ್ವ ಇಲ್ಲದೇ ಇವುಗಳನ್ನು ನಿವಾರಿಸಲು ಸಾಧ್ಯವಿಲ್ಲ. ಆದರೆ, ಕೆಲವು ರಾಜಕಾರಣಿಗಳು ಇದನ್ನೆಲ್ಲ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. "ಸಬ್ ಕಾಮ್ ಸರ್ಕಾರ ಕರೇಗಾ, ಹಮ್ ಬೇಕಾರ ರಹೆಂಗೆ" ಎನ್ನುವ ತತ್ವವನ್ನು ಜನರ ಮನಸ್ಸಿನಲ್ಲಿ ತುಂಬಿದರು. ಈ ರೀತಿ ನಡೆಯಲ್ಲ’ ಎಂದು ಹೇಳಿದರು.