‘ಶಾಸಕರು ತಮ್ಮ ಮತ ಕ್ಷೇತ್ರದಿಂದ ಬೆಂಗಳೂರಿಗೆ ಆಗಮಿಸಿ, ಇಲ್ಲಿ ಕೆಲಸ ಕಾರ್ಯಗಳನ್ನು ಮುಗಿಸಿದ ನಂತರ ಶಾಸಕರ ಭವನದ ಕೊಠಡಿಗಳಲ್ಲಿ ತಂಗುವ ವೇಳೆಯು ಅವರ ಖಾಸಗಿ ಸಮಯವಾಗಿರುತ್ತದೆ. ಆ ಸಮಯದಲ್ಲಿ ಮಾಧ್ಯಮದವರು ಭೇಟಿಯಾಗಲು ಬಂದರೆ ಅವರ ಖಾಸಗಿತನಕ್ಕೆ ಅಡಚಣೆಉಂಟಾಗುತ್ತದೆ. ಒಂದು ವೇಳೆ ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಬೇಕಿದ್ದರೆ ಶಾಸಕರ ಭವನದ ಗೇಟಿನ ಹೊರಗೆ ಬಂದು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಕಾಗೇರಿ ತಿಳಿಸಿದ್ದಾರೆ.