ಅನುಷ್ಠಾನ, ತಪಸ್ಸು, ಧ್ಯಾನದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಹಾಗೆ ಮನಸ್ಸು ಪ್ರಫುಲ್ಲಗೊಳ್ಳಬೇಕಾದರೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಕೃತಿ ಪರಿಸರದ ಮಡಿಲಿನಲ್ಲಿ ತಪಸ್ಸು ಮಾಡುವ ಪರಿಪಾಠವಿದೆ. ಸದ್ಯದ ಮಹಾಮಾರಿ ಕೊರೊನಾದಿಂದಾಗಿ ಸ್ವಾಮೀಜಿ ಅವರು ಮೌನಾನುಷ್ಠಾನವನ್ನು ಶ್ರೀಮಠದಲ್ಲಿ ಮಾಡುತ್ತಿದ್ದಾರೆ ಎಂದು ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.