ಸಂಸತ್ನಲ್ಲಿ ತಮಿಳುನಾಡು ಸಂಸದರು ಈ ವಿಷಯ ಪ್ರಸ್ತಾಪಿಸಿದಾಗ, ರಾಜ್ಯದ ಪರ ವಕಾಲತ್ತು ವಹಿಸಬೇಕು. ನೀರು–ನೆಲದ ವಿಷಯದಲ್ಲಿ ತಮಿಳುನಾಡು ಪ್ರತಿನಿಧಿಗಳು ಪಕ್ಷಭೇದ ಮರೆತು ತೋರುತ್ತಿರುವ ಕಾಳಜಿಯ ಮಾದರಿಯಲ್ಲಿ ನಮ್ಮವರು ನಡೆದುಕೊಳ್ಳಬೇಕು. ಆಗ ಮಾತ್ರ ರಾಜ್ಯದ ಹಿತ ಕಾಪಾಡಲು ಸಾಧ್ಯ. ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ ಮೇಕೆದಾಟು ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ಸಂಸದರಲ್ಲಿ ಮನವಿ ಮಾಡಲಿದ್ದಾರೆ.