ಬೆಂಗಳೂರು: ನಗರದಲ್ಲಿ ಮೆಟ್ರೋ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.ಮಂತ್ರಿ ಸ್ಕ್ವೇರ್ ಸುರಂಗದಿಂದ ಹೊರ ಬರುತ್ತಿದ್ದ ರೈಲಿನಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದಾಗಿ ಗಾಜಿನ ಪರದೆ ಜಖಂಗೊಂಡಿದೆ.
ಮೆಟ್ರೋ ರೈಲು ಮಾರ್ಗದ ಮಧ್ಯೆಕಸದ ಬ್ಯಾಗ್ ಎಸೆದಿದ್ದು ಭಾನುವಾರ ಮುಂಜಾನೆ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿರೈಲು ನಿಲ್ಲಿಸಿ ಬ್ಯಾಗ್ಗಳನ್ನು ತೆರವು ಮಾಡಿದ ನಂತರ ಓಡಾಟ ಆರಂಭಿಸಲಾಯಿತು
ಕಿಡಿಗೇಡಿಗಳ ಕೃತ್ಯದಿಂದ ಕಂಗೆಟ್ಟಿರುವ ಮೆಟ್ರೋ ಸಿಬ್ಬಂದಿಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.