ಒಂದು ಕಣ್ಣಿಗೆ ಕಾಣುವ ಸತ್ಯವೇ ನಿಜವೆಂದುಕೊಳ್ಳುವ ಅಹಂಕಾರವು ಚಾಕು, ಚೂರಿ ತೆಗೆದುಕೊಂಡು ಹೋರಾಡುವ ಹಂತಕ್ಕೆ ತಲುಪಿಸುತ್ತಿದೆ. ಇಬ್ಬಗೆಯ ವಿಚಾರವನ್ನು ತಿಳಿದು, ಜ್ಞಾನವೆಂಬ ಮೂರನೇ ಕಣ್ಣಿನಿಂದ ಯೋಚಿಸುವ ಧೀಮಂತರಿಗೆ ಸತ್ಯ ಕಾಣಿಸುತ್ತಿದೆ. ಆದರೆ, ಮೂರನೇ ಕಣ್ಣಿನಿಂದ ನೋಡುವವರನ್ನು ಅಪಾಯಕಾರಿ ಮನುಷ್ಯರೆಂದು ಭಾವಿಸುವ ಕ್ಲಿಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಈ ಸ್ಥಿತಿಯನ್ನು ಬದಲಿಸಲು ಸಾಧ್ಯವೇ ಎಂಬ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಅಕ್ಷರ ಸಲಹೆ ಮಾಡಿದರು.