‘ಶಾಸಕರು ಹಲವು ವರ್ಷಗಳಿಂದಲೂ ಈ ಕ್ರಮ ಅನುಸರಿಸುತ್ತಿದ್ದಾರೆ. ಕಲಿಕೆಗೆ ತೊಂದರೆ ಆಗಬಾರದು ಎನ್ನುವುದೇ ಅವರ ಕಾಳಜಿ. ಈ ಭಾಗದ ಅರ್ಹ ಪದವೀಧರರಿಗೆ ಕೆಲಸ, ಪ್ರಾಯೋಗಿಕ ಅನುಭವವೂ ಆಗುತ್ತಿದೆ; ಮಕ್ಕಳಿಗೂ ಅನುಕೂಲ ಆಗುತ್ತಿದೆ. ಆಯಾ ಶಾಲೆಯ ಮುಖ್ಯಶಿಕ್ಷಕರು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳುತ್ತಾರೆ’ ಎಂದು ಮೂಡಲಗಿ ಬಿಇಒ ಅಜಿತ್ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.